News @ your fingertips
News @ your fingertips
ಉದ್ಯಮಿ ವಿಜಯ ಮಲ್ಯ ಅವರು ಭಾರತಕ್ಕೆ ಮರಳುವ ಯೋಜನೆಗಳ ಬಗ್ಗೆ ಬಾಂಬೆ ಹೈಕೋರ್ಟ್ ಮಂಗಳವಾರ ಪ್ರಶ್ನಿಸಿದೆ.
ವಿಜಯ ಮಲ್ಯ ಅವರು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗದೆ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆಯ ವಿರುದ್ಧದ ಅವರ ಅರ್ಜಿಯನ್ನು ಆಲಿಸಲಾಗದು ಎಂದು ನ್ಯಾಯಾಲಯ ಅವರ ಕಾನೂನು ತಂಡಕ್ಕೆ ಸ್ಪಷ್ಟಪಡಿಸಿದೆ.
2016 ರಿಂದ ಮಲ್ಯ ಯುನೈಟೆಡ್ ಕಿಂಗ್ಡಂನಲ್ಲಿ ವಾಸಿಸುತ್ತಿದ್ದಾರೆ. ಪ್ರಸ್ತುತ ಮುಂಬೈ ಹೈಕೋರ್ಟ್ ಮುಂದೆ ಅವರ ಎರಡು ಅರ್ಜಿಗಳು ವಿಚಾರಣೆ ಬಂದಿವೆ.
ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಅಧಿಕೃತವಾಗಿ ಹಣೆಪಟ್ಟಿ ಕಟ್ಟಿದ ಆದೇಶವನ್ನು ರದ್ದುಗೊಳಿಸುವಂತೆ ಮೊದಲ ಅರ್ಜಿಯಾದರೆ, 2018 ರ ದೇಶಭ್ರಷ್ಟ ಆರ್ಥಿಕ ಅಪರಾಧಿ ಕಾಯ್ದೆಯೇ ಸಂವಿಧಾನಬಾಹಿರ ಎನ್ನುವ ಎರಡನೇ ಅರ್ಜಿಯನ್ನು ಅವರು ಸಲ್ಲಿಸಿದ್ದಾರೆ.
ಈ ಅರ್ಜಿಗಳ ವಿಚಾರಣೆಯ ಸಮಯದಲ್ಲಿ, ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅಂಕದ್ ಅವರನ್ನೊಳಗೊಂಡ ನ್ಯಾಯಾಂಗ ಪೀಠ ವಿಜಯ ಮಲ್ಯ ಅವರ ವಕೀಲ ಅಮಿತ್ ದೇಸಾಯಿ ಅವರಿಗೆ, ಮಲ್ಯ ವಿದೇಶದಲ್ಲಿ ವಾಸಿಸುವರೆಗೆ ನ್ಯಾಯಾಲಯದ ಬಾಗಿಲುಗಳು ಈ ವಾದಗಳಿಗೆ ತೆರೆದಿರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ವಂಚನೆ ಮತ್ತು ಹಣ ವರ್ಗಾವಣೆಯ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಮಲ್ಯ ತಮ್ಮ ಕಾನೂನು ದೂರುಗಳನ್ನು ಪರಿಗಣಿಸುವ ಮೊದಲು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ನ್ಯಾಯಾಮೂರ್ತಿಗಳು ಸೂಚಿಸಿದರು.
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?